ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ, ಅವರು ಯೇಸುವಿನ ಸಮಾಧಿಯ ಬಳಿಗೆ ಹೋದರು [೨೮:೧].
ದೇವದೂತನು ಇಳಿದು ಬಂದು ಕಲ್ಲನ್ನು ಉರುಳಿಸಿದ್ದನು [೨೮:೨].
ಕಾವಲುಗಾರರು ಹೆದರಿಕೊಂಡರು ಮತ್ತು ದೇವದೂತನನ್ನು ನೋಡಿದಾಗ ಸತ್ತವರಂತಾದರು [೨೮:೪].
ಯೇಸು ಎದ್ದಿದ್ದಾನೆ ಮತ್ತು ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗುತ್ತಾನೆ ಎಂದು ಹೇಳಿದನು [೨೮:೫-೭].
ಸ್ತ್ರೀಯರು ಯೇಸುವನ್ನು ಭೇಟಿಮಾಡಿದರು ಮತ್ತು ಆತನ ಪಾದಗಳನ್ನು ಮುಟ್ಟಿದರು ಹಾಗೂ ಆರಾಧನೆ ಮಾಡಿದರು [೨೮:೮-೯].
ಮಹಾಯಾಜಕರು ಸಿಪಾಯಿಗಳಿಗೆ ಬಹಳ ಹಣವನ್ನು ಕೊಟ್ಟರು ಮತ್ತು ಯೇಸುವಿನ ಶಿಷ್ಯರು ಆತನ ದೇಹವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಹೇಳಬೇಕು ಎಂಬದಾಗಿ ಹೇಳಿದರು [೨೮:೧೧-೧೩].
ಶಿಷ್ಯರು ಯೇಸುವನ್ನು ಆರಾಧಿಸಿದರು ಆದರೆ ಯಾರೋ ಸಂದೇಹಪಟ್ಟನು [೨೮:೧೭].
ಭೂಲೋಕದಲ್ಲಿ ಮತ್ತು ಪರಲೋಕದಲ್ಲಿ ಎಲ್ಲಾ ಅಧಿಕಾರವನ್ನು ತನಗೆ ಕೊಡಲಾಗಿದೆ ಎಂದು ಯೇಸು ಹೇಳಿದನು [೨೮:೧೮].
ಯೇಸು ತನ್ನ ಶಿಷ್ಯರಿಗೆ ಹೋಗಿರಿ ಶಿಷ್ಯರನ್ನು ಮಾಡಿರಿ, ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ ಮತ್ತು ನನ್ನ ಉಪದೇಶಗಳಿಗೆ ವಿಧೇಯರಾಗಬೇಕೆಂದು ಆಜ್ಞಾಪಿಸಿರಿ ಎಂದು ಹೇಳಿದನು [೨೮:೧೯-೨೦].
ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು [೨೮:೧೯].
ಯುಗದ ಸಮಾಪ್ತಿಯವರೆಗೂ ನಾನು ನಿಮ್ಮ ಜೊತೆಯಲ್ಲಿರುತ್ತೇನೆ ಎಂಬ ವಾಗ್ದಾನವನ್ನು ಆತನು ಮಾಡಿದ್ದಾನೆ [೨೮:೨೦].